HOME

BIO-DATA

ಶ್ರೀ ಯಡಿಯೂರಪ್ಪ ಬಿ. ಎಸ್.
ಕರ್ನಾಟಕ ವಿಧಾನ ಪರಿಷತ್ತು
ಮುಖ್ಯಮಂತ್ರಿಗಳು

(ವಿಧಾನ ಸಭಾ ಕ್ಷೇತ್ರ)
{ಶಿಕಾರಿಪುರ
}

(ಭಾರತೀಯ ಜನತಾ ಪಾರ್ಟಿ)

ಇ-ಮೇಲ್‌ : bsy@risayeekarnataka.com
ದೂರವಾಣಿ : 080-22255801
ಫ್ಯಾಕ್ಸ್‌ ಸಂಖ್ಯೆ : 080-22255801
ಜನ್ಮ ದಿನಾಂಕ : 27-02-1943
ಜನ್ಮ ಸ್ಥಳ : ಬೂಕನಕೆರೆ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ
ತಂದೆಯ ಹೆಸರು : ದಿ: ಸಿದ್ದಲಿಂಗಪ್ಪ
ತಾಯಿಯ ಹೆಸರು : ದಿ: ಪುಟ್ಟತಾಯಮ್ಮ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ದಿವಂಗತ ಮೈತ್ರಾದೇವಿ
ಮಕ್ಕಳು : ಗಂಡು - 2 , ಹೆಣ್ಣು - 3
ವಿದ್ಯಾರ್ಹತೆ : (ಎಂ.ಎ.,)
ವೃತ್ತಿ : ಕೃಷಿಕರು
ಮೊಬೈಲ್‌ ಸಂಖ್ಯೆ : 9980080682
ಹೊಂದಿರುವ ಸ್ಥಾನಮಾನಗಳು : ಮುಖ್ಯಮಂತ್ರಿಗಳು
ಹೊಂದಿದ್ದ ಸ್ಥಾನಮಾನಗಳು :
  • 12-11-2007 ರಿಂದ 19-11-2007 ಮುಖ್ಯಮಂತ್ರಿಗಳು
  • 2006 ರಿಂದ 2007 ಉಪ ಮುಖ್ಯಮಂತ್ರಿಗಳು
  • 1983 ರಿಂದ 1985 ವಿಧಾನಸಭಾ ಸದಸ್ಯರು
  • 1985 ರಿಂದ 1989 ವಿಧಾನಸಭಾ ಸದಸ್ಯರು
  • 1989 ರಿಂದ 1994 ವಿಧಾನಸಭಾ ಸದಸ್ಯರು
  • 1994 ರಿಂದ 1999 ವಿಧಾನಸಭಾ ಸದಸ್ಯರು
  • 2004 ರಿಂದ 2007 ವಿಧಾನಸಭಾ ಸದಸ್ಯರು
  • 2000 ರಿಂದ 2004 ವಿಧಾನ ಪರಿಷತ್‌ ಸದಸ್ಯರು
  • 1994 ರಿಂದ 1996 ವಿರೋಧ ಪಕ್ಷದ ನಾಯಕರು, ವಿಧಾನಸಭೆ
  • 2004 ರಿಂದ 2006 ವಿರೋಧ ಪಕ್ಷದ ನಾಯಕರು, ವಿಧಾನಸಭೆ
  • 1975 ಸದಸ್ಯರು, ಶಿಕಾರಿಪುರ ಪುರಸಭೆ
  • 1977 ರಿಂದ 1981 ಅಧ್ಯಕ್ಷರು, ಶಿಕಾರಿಪುರ ಪುರಸಭೆ
  • ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು :

    • ಸಮಾಜದ ಕೆಲಸಗಳು (ಅಭಿವೃದ್ಧಿ)
    ಇತರೆ ಆಸಕ್ತಿ ವಿಷಯಗಳು :
    • ಓದುವುದು

    ವಿದೇಶಗಳಿಗೆ ನೀಡಿರುವ ಭೇಟಿ :

    • ಯೂರೋಪ್‌, ಆಸ್ಟ್ರೇಲಿಯಾ, ಅಮೇರಿಕಾ, ದುಬೈ, ಹಾಂಗ್‌ಕಾಂಗ್‌, ಮಲೇಷಿಯಾ, ಸಿಂಗಪೂರ್‌

    ಮಾಡಿದ ಸಾಧನೆಗಳ ಸವಾರಿ-ಬೆಳೆದು ಬಂದ ದಾರಿ :

    • 1965 ಆರ್‌.ಎಸ್.ಎಸ್. ನ ಸಾಮಾನ್ಯ ಕಾರ್ಯಕರ್ತ
    • 1970-72 ಶಿಕಾರಿಪುರ ತಾಲ್ಲೂಕು ಕಾರ್ಯವಾಹಕ
    • 1972 ಜನಸಂಘದ ತಾಲ್ಲೂಕಿನ ಅಧ್ಯಕ್ಷ
    • 1977 ಜನತಾ ಪಕ್ಷದ ತಾಲ್ಲೂಕಿನ ಕಾರ್ಯದರ್ಶಿ
    • 1980 ಬಿಜೆಪಿಯ ತಾಲ್ಲೂಕು ಅಧ್ಯಕ್ಷ
    • 1985 ಬಿಜೆಪಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ
    • 1988-1991 ಬಿಜೆಪಿಯ ರಾಜ್ಯಾಧ್ಯಕ್ಷ
    • 1992 ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ
    • 1995-2000 ಬಿಜೆಪಿಯ ರಾಜ್ಯಾಧ್ಯಕ್ಷ
    • 2003 ಬಿಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷ

    ವ್ಯಕ್ತಿ ಚಿತ್ರಣ :

    • ಮಂಡ್ಯ ಜಿಲ್ಲೆ ಕೆ.ಅರ್.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಶ್ರಿ ಸಿದ್ದಲಿಂಗಪ್ಪ, ಶ್ರೀಮತಿ ಪುಟ್ಟತಾಯಮ್ಮ ಅವರ ಮಗನಾಗಿ 1943 ಫೆಬ್ರವರಿ 27ರಂದು ಜನನ.
    • 1965ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ.
    • ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರ ಜೊತೆ ಸಂಪರ್ಕಕ್ಕೆ ಬಂದಿದ್ದು, ಇವರ ಹೋರಾಟದ ಕೆಚ್ಚು, ನಿಷ್ಠೆ, ಸಮಾಜಮುಖಿ ಬದುಕಿಗೆ ನಾಂದಿಯಾಯಿತು.
    • ಕಾರ್ಯಕ್ಷೇತ್ರವಾಗಿ ಶಿಕಾರಿಪುರವನ್ನು ಆರಿಸಿಕೊಂಡ ಶ್ರೀ ಯಡಿಯೂರಪ್ಪನವರು ಶಿಕಾರಿಪುರದ ದಿವಂಗತ ವೀರಭದ್ರಶಾಸ್ತ್ರಿ ಅವರ ಪುತ್ರಿ ಮೈತ್ರಾದೇವಿಯೊಂದಿಗೆ ವಿವಾಹ.
    • 1972ರಲ್ಲಿ ಶಿಕಾರಿಪುರ ತಾಲ್ಲೂಕಿನ ಜನಸಂಘದ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣ ಪ್ರವೇಶ.
    • 1975ರಲ್ಲಿ ಶಿಕಾರಿಪುರ ಪುರಸಭಾ ಸದಸ್ಯರಾಗಿ, ಮಾರ್ಚ್‌ 1977 ರಿಂದ ಫೆಬ್ರವರಿ 1981ರವರೆಗೆ ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ, ಶಿಕಾರಿಪುರದ ನೀರು,ವಿದ್ಯುತ್‌, ರಸ್ತೆ, ಸ್ವಚ್ಛತೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟ. ಅಧಿಕಾರ ಸಿಕ್ಕಾಗ ಶಿಕಾರಿಪುರ ನಗರದ ಚಿತ್ರಣವನ್ನೇ ಬದಲಾಯಿಸಿದ ಕೀರ್ತಿ. ಬಡವರ ಬದುಕಿಗೆ ಸ್ಪಂದಿಸುವ ಸದಾ ಕ್ರಿಯಾಶೀಲರಾಗಿರುವ ರಾಜಕಾರಣಿ ಎಂಬ ಹೆಗ್ಗಳಿಕೆ. ಕುಮುದ್ವತಿ ನೀರನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ ತೊಟ್ಟು, ಅದರಲ್ಲಿ ಯಶಸ್ಸು ಗಳಿಕೆ.
    • 1983ರಲ್ಲಿ ಪ್ರಥಮ ಬಾರಿಗೆ ಕರ್ನಾಟಕದ ವಿಧಾನಸಭೆಗೆ ಭಾರಿ ಬಹುಮತದಿಂದ ಪ್ರವೇಶ. ಶಿವಮೊಗ್ಗದಲ್ಲಿ ರೈತರ, ಬಡ ಜನರ ಹೋರಾಟಕ್ಕೆ ಇನ್ನಷ್ಟು ಚುರುಕುತನ. ನಿರಂತರ ಹೋರಾಟದಿಂದ ಬಿಜೆಪಿ ಜನಸಾಮಾನ್ಯರ ಪಕ್ಷವೆಂಬ ಮಾನ್ಯತೆ. ವಿಧಾನಸಭೆಯಲ್ಲಿ ಬಿಜೆಪಿಯ 18 ಸದಸ್ಯರಿದ್ದರೂ ಮಂತ್ರಿಗಿರಿ / ಅಧಿಕಾರಕ್ಕೆ ಆಸೆ ಪಡದೆ, ರೈತರ ಸಾಲಮನ್ನಾ ಮಾಡಲು ಒತ್ತಾಯ.ಹೋರಾಟದ ಪ್ರತಿಫಲ-ರೈತರ ಸಾಲ ಮನ್ನಾ.
    • ತುರ್ತು ಪರಿಸ್ಥಿತಿಯ ವಿರುದ್ಧ ಕೆಚ್ಚೆದೆಯ ಹೋರಾಟ. ಭೂಗತರಾಗಿದ್ದುಕೊಂಡೇ ಜನ ಸಂಘಟನೆಯಲ್ಲಿ ತೊಡಗಿ, ಸಾಗರ ಮತ್ತು ಬಳ್ಳಾರಿಯಲ್ಲಿ ಜೈಲುವಾಸ. ಜೈಲಿನಲ್ಲಿದ್ದುಕೊಂಡು ಖೈದಿಗಳಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ. ಹೋರಾಟದ ವಿಶೇಷತೆ ಖೈದಿಗಳಿಗೆ ನ್ಯಾಯ ದೊರೆತದ್ದು.
    • ಶಿಕಾರಿಪುರ ಕ್ಷೇತ್ರದಿಂದ ಐದು ಬಾರಿ ವಿಧಾನಸಭೆಗೆ ಆಯ್ಕೆ. ಒಂದು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆ. 1994ರಲ್ಲಿ ಮತ್ತು 2004ರಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಪ್ರಭಾವಿ ಹೋರಾಟ. 2006ರಲ್ಲಿ ಉಪ ಮುಖ್ಯಮಂತ್ರಿ(ಖಾತೆ-ಹಣಕಾಸು ಹಾಗೂ ಸಣ್ಣ ನೀರಾವರಿ ಇಲಾಖೆ).
    • 1988 ರಿಂದ 1991, 1995 ರಿಂದ 2000ರವರೆಗೆ 9 ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ ಪಕ್ಷದ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತ, ಬಿಜೆಪಿ ಕೇವಲ ನಗರ ಜನತೆಯ ಪಾರ್ಟಿ ಎನ್ನುತ್ತಿದ್ದವರಿಗೆ, ಬಿಜೆಪಿ ರೈತರ ಪಾರ್ಟಿ, ದೀನದಲಿತರ ಪಾರ್ಟಿ, ಕೃಷಿ ಕೂಲಿ ಕಾರ್ಮಿಕರ ಪಾರ್ಟಿ ಎನ್ನುವಂತೆ ಮಾಡಿದ ಕೀರ್ತಿ.
    • 1991ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ರಾಷ್ಟ್ರಧ್ವಜ ಹಾರಿಸಲು ಸವಾಲೊಡ್ಡಿದಾಗ ಡಾ: ಮುರಳಿ ಮನೋಹರ ಜೋಷಿ ನೇತೃತ್ವದಲ್ಲಿ ಶ್ರೀನಗರದ ಲಾಲ್‌ ಚೌಕದಲ್ಲಿ ರಾಷ್ಟ್ರಧ್ವಜಾರೋಹಣ. ಕರ್ನಾಟಕದ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾದಾಗ ಆ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸಲು ಶಪಥ. ಜನಜಾಗೃತಿ ಮೂಡಿಸಲು ರಾಜ್ಯ ಪ್ರವಾಸ. ಸತತ ನಾಲ್ಕು ವರ್ಷಗಳವರೆಗೆ ರಾಷ್ಟ್ರೀಯ ಹಬ್ಬಗಳಂದು (ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ) ರಾಷ್ಟ್ರಧ್ವಜ ಹಾರಿಸಲು ಕಾರಣಕರ್ತ.
    • ಜೀತಮುಕ್ತರ ಪರಿಹಾರಕ್ಕಾಗಿ ಶಿಕಾರಿಪುರ ಬಿಡಿಒ ಕಛೇರಿ ಮುಂದೆ ಒಂದು ತಿಂಗಳ ಕಾಲ ನಿರಂತರ ಹಗಲು / ರಾತ್ರಿ ಧರಣಿ. ಸರ್ಕಾರ ಸ್ಪಂದಿಸದ ಕಾರಣ ಶಿವಮೊಗ್ಗಕ್ಕೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ. ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ. ಸರ್ಕಾರ ಮಣಿದು ಜೀತಮುಕ್ತರಿಗೆ ಎಲ್ಲಾ ಕೀರ್ತಿ. ಅದರಂತೆ ಬಿಜೆಪಿ ರೈತರ, ದೀನದಲಿತರ ಪಾರ್ಟಿ ಎಂಬುದನ್ನು ನಾಡಿನ ಜನತೆಗೆ ಮನವರಿಕೆ ಮಾಡಿಕೊಟ್ಟಿರುವ ಕೀರ್ತಿ.
    • 1998ರಲ್ಲಿ ಕಾವೇರಿ ಸಮಸ್ಯೆ ಮತ್ತೆ ಉಲ್ಬಣ. ಕಾವೇರಿ ಹುಟ್ಟೂರಿನಲ್ಲಿ ನೀರಿಗಾಗಿ ರೈತರ ಪರದಾಟ. ಸಾವಿರಾರು ರೈತರೊಂದಿಗೆ ತಲಕಾವೇರಿಯಿಂದ ಕೃಷ್ಣರಾಜಸಾಗರದವರೆಗೆ ರೈತಜಾಥಾ. ಸರ್ಕಾರದ ಗಮನ ಸೆಳೆತ.
    • 1999ರಲ್ಲಿ ಪಕ್ಷದ ಸಂಘಟನೆಗಾಗಿ, ಜನಜಾಗೃತಿಗಾಗಿ ಐತಿಹಾಸಿಕ ಸಂಕಲ್ಪಯಾತ್ರೆ. ಒಂದೂವರೆ ತಿಂಗಳ ಕಾಲ ನಿರಂತರ ಪ್ರವಾಸ. ಹಳ್ಳಿ ಹಳ್ಳಿಗಳಲ್ಲಿ ಭವ್ಯ ಸ್ವಾಗತ. ಬಿಜೆಪಿ ಪರ್ಯಾಯ ಪಕ್ಷವೆಂಬ ಉದ್ಘಾರ. ಶ್ರೀ ಅಟಲ್‌ ಬಿಹಾರಿ ವಾಜಪೇಯಿಯವರಿಂದ ಶ್ಲಾಘನೆ, ಆಲಿಂಗನ. ಇದರಿಂದಾಗಿ ಬಿಜೆಪಿಯಿಂದ 1999ರಲ್ಲಿ 44 ಶಾಸಕರು ವಿಧಾನಸಭೆಗೆ.
    • 2002ರಲ್ಲಿ ಬಗರ್‌ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರನ್ನು ಸರ್ಕಾರ ಒಕ್ಕಲೆಬ್ಬಿಸಲು ಮುಂದಾದಾಗ ಬಗರ್‌ ಹುಕುಂ ಸಾಗುವಳಿದಾರರ ಪರವಾಗಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ. ಶಿವಮೊಗ್ಗದಲ್ಲಿ ಒಂದು ವಾರ ಕಾಲ ಹಗಲು / ರಾತ್ರಿ ಧರಣಿ. ಸರ್ಕಾರದ ಕಣ್ಣು ತೆರೆಸಿದ ಕೀರ್ತಿ.
    • 2002ರಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಸಾವಿರಾರು ರೈತರೊಂದಿಗೆ ಶಿಕಾರಿಪುರ ಮತ್ತು ಶಿವಮೊಗ್ಗದ ಎಪಿಎಂಸಿ ಎದುರು ಧರಣಿ. ಹೋರಾಟದ ಪ್ರತೀಕವಾಗಿ ಸರ್ಕಾರದಿಂದ ಜೋಳ ಖರೀದಿ.
    • ಬೆಂಗಳೂರಿನಲ್ಲಿ ನಿರಂತರ 9 ದಿನಗಳ ಕಾಲ ಹಗಲು / ರಾತ್ರಿ ಧರಣಿ. ರೈತರಿಗೆ ನಿರಂತರ ವಿದ್ಯುತ್‌ ಪೂರೈಕೆಗೆ ಆಗ್ರಹ.
    • 2002 ಮತ್ತು 2004 ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ, ಸಿಇಟಿ ಗೊಂದಲ ನಿವಾರಣೆಗೆ ಆಗ್ರಹ, ನಕಲಿ ಛಾಪಾ ಕಾಗದ ಹಗರಣದ ತನಿಖೆಗೆ ಆಗ್ರಹ, ಹಗಲು ರಾತ್ರಿ ಧರಣಿ.
    • ಶಿಕಾರಿಪುರ ಬಳಿಯ ಅಂಜನಾಪುರ ಜಲಾಶಯ ತನ್ನ ವಿನೂತನ ವಿನ್ಯಾಸದಿಂದಾಗಿ ಇಡೀ ಏಷ್ಯದಲ್ಲಿ ಹೆಸರುವಾಸಿ. ಈ ಜಲಾಶಯ ನಿರ್ಮಾಣದಿಂದಾಗಿ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸಿ ಜಲದಾತ ಎಂಬ ಬಿರುದಿಗೆ ಪಾತ್ರ.
    • ಕಾವೇರಿ ಹೋರಾಟದಿಂದ ರಾಮಜನ್ಮ ಭೂಮಿ ಹೋರಾಟದವರೆಗೆ, ಜೀತಮುಕ್ತರ ಸಮಸ್ಯೆಯಿಂದ ಬಗರ್‌ ಹುಕುಂ ಸಮಸ್ಯೆಯವರೆಗೆ ನಿರಂತರ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದು ಒಂದು ದಾಖಲೆ. ಹೋರಾಟಕ್ಕೆ ಶ್ರೀ‌ ಅಟಲ್ ಬಿಹಾರಿ ವಾಜಪೇಯಿಯವರಿಂದ ಮುಕ್ತ ಶ್ಲಾಘನೆ, ಶುಭಾಶಯ.
    • ಶ್ರೀ ಗುಂಡೂರಾಯರ ಅಧಿಕಾರ ಅವಧಿಯಲ್ಲಿ ಕೂಲಿಗಾಗಿ ಕಾಳು ಯೋಜನೆ ದುರುಪಯೋಗದ ವಿರುದ್ಧ ತೀವ್ರ ಪ್ರತಿಭಟನೆ.
    • ಸಿ ಮತ್ತು ಡಿ ವರ್ಗದ ಜಮೀನನ್ನು ರೈತರಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲು ಮುಂದಾದಾಗ ರೈತರ ಪರ ಟೊಂಕ ಕಟ್ಟಿನಿಂತ ಧೀಮಂತ. ಜಾಥಾ, ಚಳುವಳಿ, ಧರಣಿ ಮೂಲಕ ಪ್ರತಿಭಟನೆ. 1988ರಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ವಿರೋಧಿಸಿ ತೀವ್ರ ಏಕಾಂಗಿ ಹೋರಾಟ ಪ್ರತಿಭಟನೆ, ಧರಣಿ ಆಕ್ರೋಶಗಳಿಗೆ ಮಣಿಯದ ಸರ್ಕಾರ.ಸದನದಲ್ಲೇ ರೈತರ ಪರ ಕಣ್ಣೀರು ಸುರಿಸಿದ ನೇಗಿಲಯೋಗಿ, ಸರ್ಕಾರದ ಕಣ್ಣು ತೆರೆಸಿ, ವಿಧೇಯತ ವಾಪಸ್‌. ಅರಣ್ಯ ಸಚಿವರಾದ ಶ್ರೀ ಬಿ. ರಾಚಯ್ಯನವರಿಂದ ಪ್ರಶಂಸೆ. ಏಕಾಂಗಿ ವೀರನ ಸಾಹಸಗಾಥೆಯಿಂದ ಇಡೀ ನಾಡಿಗೆ ಅಚ್ಚರಿ. ರೈತರಿಂದ ಸಂಭ್ರಮ. ರೈತ ನಾಯಕ ಯಡಿಯೂರಪ್ಪ ಎಂಬ ಪ್ರಶಂಸೆ. ವಿಧಾನಮಂಡಲದ ಇತಿಹಾಸದಲ್ಲಿ ಸರ್ಕಾರ ವಿಧೇಯಕ ವಾಪಸ್‌ ಪಡೆದ ದಾಖಲೆ ನಿರ್ಮಾಣ.
    • 1974ರಲ್ಲಿ ಗ್ರಾಮ ರಾಜ್ಯ ಉಳಿಸಿ ರೈತರನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ. ವಿಧಾನಸೌಧಕ್ಕೆ ಮುತ್ತಿಗೆ. ಪಂಚಾಯತ್‌ ಚುನಾವಣೆ ನಡೆಸಲು ಒತ್ತಾಯ. ಬಿಜೆಪಿ ನಾಯಕ ಶ್ರೀ ಲಾಲ್‌ಕೃಷ್ಣ ಅಡ್ಡಾಣಿಯವರಿಂದ ರೈತನಾಯಕ ಯಡಿಯೂರಪ್ಪನವರಿಗೆ ಶುಭಾಶಯ.
    • 1988ರಲ್ಲಿ ರೈತರ ಸಮಸ್ಯೆಗಳನ್ನು ತೆಗೆದುಕೊಂಡು ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ರೈತ ಜಾಥಾ. ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಭಾಷಣ.
    • ಬಸವಕಲ್ಯಾಣದಿಂದ ರೈತ ಜಾಗೃತಿಯನ್ನು ಮೂಡಿಸಲು ಇನ್ನೊಂದು ಬಾರಿ ರೈತ ಜಾಥಾ. ಲಕ್ಷಾಂತರ ರೈತರ ಪಾಲ್ಗೊಳ್ಳುವಿಕೆಯಿಂದ ಒಂದು ಐತಿಹಾಸಿಕ ದಾಖಲೆ.
    • ಮೂರನೇ ಬಾರಿಗೆ ಬನವಾಸಿಯಿಂದ ಬೆಂಗಳೂರಿಗೆ ರೈತ ಜಾಥಾ. ಕೃಷ್ಣರಾಜಸಾಗರಕ್ಕೆ ಮತ್ತೊಂದು ಬಾರಿ ರೈತ ಜಾಥಾ. ಹೀಗೆ ರೈತ ಜಾಥಾದಲ್ಲಿ ರೈತರನ್ನು ಜಾಗೃತಗೊಳಿಸಿ, ಬಡಿದೆಬ್ಬಿಸಿ, ವಿಶ್ವಾಸ ಮೂಡಿಸಿದ ಹೋರಾಟ, ಜನಪರ ಕಾಳಜಿ ಹೊಂದಿದ ಧೀರೋದಾತ. ದಿನಂಪ್ರತಿ ಬೆಳಿಗ್ಗೆ ದೇವರ ಪೂಜೆ ಮಾಡದಿದ್ದರೂ ಪರವಾಗಿಲ್ಲ, ದೀನದಲಿತರ ಸೇವೆಯಿಂದ ಪೂಜೆಗೈಯಲು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಧರ್ಮದಾತ.
    • ಜೀವ ಬೆದರಿಕೆಗೆ ಬಗ್ಗದೆ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಭೂಗತ ದೊರೆ ದಾವುದ್‌ ಇಬ್ರಾಹಿಂನೊಂದಿಗೆ ಶಾಮೀಲಾಗಿದ್ದ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ ಮತ್ತು ಆತನ ಸಹಚರರ ವಿವರಗಳನ್ನು ಬಯಲು ಮಾಡಿ, ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿ, ಅವರ ಬಂಧನಕ್ಕೆ ಕಾರಣಕರ್ತ.
    • ಕೂಲಿಗಾಗಿ ಕಾಳು ಯೋಜನೆ ದುರುಪಯೋಗ ಆದಾಗ ಜನತಾ ಅದಾಲತ್‌ ಕಾರ್ಯಕ್ರಮವನ್ನು ರೂಪಿಸಿ ಬರಗಾಲ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಈ ಭ್ರಷ್ಠಾಚಾರದ ಹಗರಣವನ್ನು ಬಯಲು ಮಾಡಿದ ಕೀರ್ತಿ.
    • ಕಾವೇರಿ ತಟದ ಬೂಕನಕೆರೆಯಲ್ಲಿ ಹುಟ್ಟಿ, ಆರ್‌,ಎಸ್‌.ಎಸ್. ಆಶ್ರಯದಲ್ಲಿ ಪಳಗಿ, ನಾಡಿನ ರೈತ, ದೀನ ದಲಿತರ ನಾಯಕನಾಗಿ ಬೆಳೆದ ದಣಿವರಿಯದ ಹೋರಾಟಗಾರ.
    • ರಾಜ್ಯ ಕಂಡ ಅಪರೂಪದ ರಾಜಕಾರಣಿ, ರೈತ ನಾಯಕ, ದೀನದಲಿತರ ಧುರೀಣರ ಮುಂದುವರಿಯಲಿ. ಶೋಷಿತರ ಪರ ಇನ್ನಷ್ಟು ಹೋರಾಟ, ಸಂಘಟಿಸುವ ಕಸುವನ್ನು ಆ ಭಗವಂತ ಅವರಿಗೆ ನೀಡಲೆಂದು ನಾಡಿನ ಜನತೆಯ ಆಶಯ.
    ಖಾಯಂ ವಿಳಾಸ : ಶಿಕಾರಿಪುರ ಅಂಚೆ /ತಾಲ್ಲೂಕು, ಶಿವಮೊಗ್ಗ ಜಿಲ್ಲೆ
    ಈಗಿನ ವಿಳಾಸ : ನಂ. 2, ರೇಸ್‌ ವ್ಯೂ ಕಾಟೇಜ್‌, ರೇಸ್‌ ಕೋರ್ಸ್‌ ರಸ್ತೆ, ಬೆಂಗಳೂರು-01